Sunday, May 24, 2009

ಛಾಯಾಗ್ರಾಹಕ ಸುಧೀಂದ್ರಗೆ ಪ್ರಶಸ್ತಿ

ವಿಕ ಸುದ್ದಿಲೋಕ
ಬಾಗಲಕೋಟ : ವಿಜಾಪುರದ ಹವ್ಯಾಸಿ ಛಾಯಾಗ್ರಾಹಕ ಸುಧೀಂದ್ರ ಕುಲಕರ್ಣಿಯವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಫೋಟೊಗ್ರಾಫಿಕ್ ಸೊಸೈಟಿಯ ಪ್ರಶಸ್ತಿ ದೊರೆತಿದೆ.
ಗ್ರಾಮೀಣ ಬದುಕು ವಿಭಾಗದಲ್ಲಿ ಸುಂದ್ರರ ಕಾರ ಹುಣ್ಣಿವೆ ಸಂಭ್ರಮ ಫೋಟೊಕ್ಕೆ ತೃತೀಯ ಸ್ಥಾನ ದೊರೆತಿದೆ. ಕಳೆದ ೧೨ ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಸುಧೀಂದ್ರ ವಿಜಯ ಕರ್ನಾಟಕ ದಿನಪತ್ರಿಕೆಯ ವಿಜಾಪುರ ಜಿಲ್ಲೆಯ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಬದುಕು, ಪರಿಸರ, ಕ್ರೀಡಾ ಕ್ಷೇತ್ರದ ಛಾಯಾಗ್ರಹಣದಲ್ಲಿ ಸುಧೀಂದ್ರ ಹೆಸರುವಾಸಿ. ಸಾಗರದಲ್ಲಿ ಜೂ.೧೫ ರಂದು ನಡೆಯುವ ಸಮಾರಂಭದಲ್ಲಿ ಸುಧೀಂದ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.



ಸುಧೀಂದ್ರ ಕುಲಕರ್ಣಿಯವರ ಪ್ರಶಸ್ತಿ ವಿಜೇತ ಫೋಟೊ.



ಸುಧೀಂದ್ರ ಕ್ಲಿಕ್ಕಿಸಿದ ಮತ್ತಷ್ಟು ಫೋಟೊಗಳು...





1 comment:

  1. ಸುಧೀಂದ್ರ ಕುಲಕರ್ಣಿಯವರಿಗೆ ಅಭಿನಂದನೆಗಳು..

    ಉತ್ತಮ ಛಾಯಾಚಿತ್ರಗಳು

    -ಶೆಟ್ಟರು
    http://somekanasu.wordpress.com/

    ReplyDelete