Wednesday, March 11, 2009

ಬಾಗಲಕೋಟ ಹೋಳಿ ಉತ್ಸವಕ್ಕೆ ಚಾಲನೆ


ಬಾಗಲಕೋಟದಲ್ಲಿ ಮಂಗಳವಾರ ಹೋಳಿ ಉತ್ಸವದಂಗವಾಗಿ ತುರಾಯಿ ಹಲಗೆ ಬಾರಿಸುತ್ತಿರುವ ಯುವಕರು.
ವಿಕ ಸುದ್ದಿಲೋಕ
ಬಾಗಲಕೋಟ: ತುರಾಯಿ ಹಲಗೆ ವಾದನ, ಚಿಣ್ಣರ ನರ್ತನದೊಂದಿಗೆ ಮಂಗಳವಾರ ರಾತ್ರಿ ಹೋಳಿ ಉತ್ಸವ -೨೦೦೯ ಕ್ಕೆ ಚಾಲನೆ ದೊರೆಯಿತು.
ನಗರದ ನಾನಾ ಓಣಿಗಳ ಯುವಕರ ತಂಡಗಳು ತುರಾಯಿ ಹಲಗೆ ಬಾರಿಸುವುದರೊಂದಿಗೆ ಹಬ್ಬದ ಸಂಭ್ರಮಕ್ಕೆ ಕಳೆ ತಂದರು.
ಲಯಬದ್ಧ ಹಲಗೆಯ ತಾಳಕ್ಕೆ ಮಕ್ಕಳು ನರ್ತಿಸಿದರೆ, ಹಿರಿಯರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಉತ್ಸವಕ್ಕೆ ಚಾಲನೆ ನೀಡಿದ ಬಿಟಿಡಿಎ ಅಧ್ಯಕ್ಷ ಲಿಂಗರಾಜ ವಾಲಿ ಮಾತನಾಡಿ, ಹೋಳಿ ಹಬ್ಬ ಯುವಕರಲ್ಲಿ ಪ್ರೋತ್ಸಾಹ ಹಾಗೂ ಸೂರ್ತಿಗೊಳಿಸುತ್ತದೆ. ದೇಶದಲ್ಲಿ ವಿಶಿಷ್ಟವಾಗಿರುವ ಬಾಗಲಕೋಟ ಹೊಳಿ ಹಬ್ಬದ ಗತವೈಭವ ಮರಳಿ ಬಂದಿದೆ ಎಂದರು.
ಯುವ ಮುಖಂಡ ಬಸವಪ್ರಭು ಸರನಾಡಗೌಡ ಮಾತನಾಡಿ, ಕೋಲ್ಕತ್ತಾದಲ್ಲಿ ಹೋಳಿ ಹಬ್ಬ ಕ್ರಮೇಣ ಜನಪ್ರೀಯತೆ ಕಳೆದುಕೊಳ್ಳುತ್ತಿದೆ. ಆದರೆ ಬಾಗಲಕೋಟದಲ್ಲಿ ಹಬ್ಬ ವೈಭವಯುತವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮ ಸಡಗರ ನಿರಂತರವಾಗಿರಲಿ ಎಂದು ಹೇಳಿದರು.
ಜಿ.ಐ.ಬಾಗೇವಾಡಿ ಮಾತನಾಡಿ ಹೋಳಿ ಹಬ್ಬ ಏಕತೆ ಸಂದೇಶ ಸಾರುತ್ತದೆ. ಈ ಹಬ್ಬದ ಮೂಲಕ ಮೂರು ದಿನಗಳವರೆಗೆ ಎಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಿಸಿರಿ ಎಂದರು.
ಟೀಕಿನ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಶೋಕ ಲಿಂಬಾವಳಿ, ಡಾ.ಎಂ.ಎಸ್.ದಡ್ಡೇನ್ನವರ, ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ನಾರಾಯಣಸಾ ಭಾಂಡಗೆ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ವೇದಿಕೆಯಲ್ಲಿದ್ದರು.
ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ ಸ್ವಾಗತಿಸಿದರು. ಉಪಾಧ್ಯಕ್ಷ ಸೋಮಶೇಖರ ಸರಗಣಾಚಾರಿ ನಿರೂಪಿಸಿದರು.




No comments:

Post a Comment