Thursday, March 12, 2009

ಬೈಯ್ದ ಮೈದುನರಿಗೆ ಅತ್ತಿಗೆಯರಿಂದ ಲತ್ತೆ !






ವಿಕ ಸುದ್ದಿಲೋಕ
ಶಿರೂರ: ಸಮೀಪದ ನೀಲಾನಗರ ತಾಂಡಾದಲ್ಲಿ ಗುರುವಾರ ತಮ್ಮ ತಮ್ಮ ಅತ್ತಿಗೆಯಗೆಯರನ್ನು ಮೈದುನರು ಆಶ್ಲೀಲ ಪದಗಳಿಂದ ಬೈಯತೊಡಗಿದರು. ಇದನ್ನು ಸಹಿಸದ ಅತ್ತಿಗೆಯರು ಅಟ್ಟಾಡಿಸಿಕೊಂಡು ಹೋಗಿ ಬಡಿಗೆಯಿಂದ ಬಡಿದರು.
ಅತ್ತಿಗೆಯರ ಹೊಡೆತ ತಪ್ಪಿಸಿಕೊಳ್ಳಲು ತಮ್ಮ ಕೈಯಲ್ಲಿನ ಬಡಗಿಯನ್ನು ಅಡ್ಡಗಟ್ಟಿದರು. ಕೊನೆಗೆ ಅವರೇ ಸೋತು ಹತ್ತೋ,ಇಪ್ಪತೋ ರೂಪಾಯಿ ಕೊಟ್ಟು ಹೋದರು.
ಇದೇನಪ್ಪಾ ಬೈಯ್ದ ಮೈದುನರನ್ನು ಹದ್ದುಬಸ್ತಿನಲ್ಲಿಡುವ ಬದಲು ಬಹುಮಾನ ಕೊಡುತ್ತಾರಲ್ಲ ಎಂದು ಗಾಬರಿಯಾಗಬೇಡಿ. ಬಾಗಲಕೋಟ ತಾಲೂಕಿನ ಶಿರೂರ ಸಮೀಪದ ನೀಲಾನಗರ ಲಂಬಾಣಿ ಸಮಾಜದವರು ಎರಡು ದಿನ ಆಚರಿಸುವ ವೈಶಿಷ್ಠು ಹೋಳಿ ಇದು.
ಸಿಹಿ ಅಡುಗೆ
ಗ್ರಾಮದ ಅಂಗಳದಲ್ಲಿ ಹುಗಿದಿದ್ದ ಅಡುಗೆಯ ಹಂಡೆಯನ್ನು ಪುರುಷರು ಹರ ಸಾಹಸ ಮಾಡಿ ತೆಗೆಯುತ್ತಾರೆ ಅಗಲು ಪುರುಷರಿಗೆ ಹೊಡೆತ ಬೀಳುತ್ತವೆ.
ಲಂಬಾಣಿ ಜನಾಂಗದ ಸಂಪ್ರದಾಯ ಕುರಿತು ವಿವರ ನೀಡುವ ಗ್ರಾಮದ ಹಿರಿಯ ನಾಗೇಶ ಪೂಜಾರಿ, ಎರಡು ದಿನಗಳ ಹಿಂದೆ ಹಿರಿಯ ಮುಖಂಡರು ಗ್ರಾಮದ ೧೮ ವರ್ಷದ ಮದುವೆಯಾದಾಗ ಇಬ್ಬರು ಯುವಕರಿಗೆ ಪೇಟಾ, ಧೋತಿ ಸುತ್ತಿ ಅವರಿಗೆ ಗೇರಿಯಾ (ಚಿಕ್ಕ ಯಜಮಾನ) ಎಂದು ನಾಮಕರಣ ಮಾಡುತ್ತಾರೆ. ಚಿಕ್ಕ ಯಜಮಾನರೇ ಕಾಮದಹನ ಮಾಡುತ್ತಾರೆ ಹಾಗೂ ಈ ವರ್ಷದಲ್ಲಿ ಗಂಡು ಮಗು ಜನಿಸಿದ ಮನೆಗೆ ಹಿರಿಯರು ಹೋಗಿ ಬಂಜಾರ ಭಾಷೆಯಲ್ಲಿ ಹಾಡುತ್ತಾ ಶುಭ ಹಾರೈಸಿ ಮನೆಯವರೆಗೆ ಸಿಹಿ ನೀಡಿ ಬರುತ್ತಾರೆ ಎಂದು ಹೇಳಿದರು.

No comments:

Post a Comment